ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                                                              

ದಿನಾಂಕ: 27-12-2022 ರಂದು ಪಿರ್ಯಾದಿ RONALD VINCENT CRASTA ರವರು ಕುಲಶೇಕರದಲ್ಲಿರುವ ತನ್ನ ಮನೆಯ ಕಡೆಗೆ ಕಾರಿನಲ್ಲಿ ಹೋರಟಿದ್ದು,  ಬಿಕರ್ಣಕಟ್ಟೆ ಕೈಕಂಬ ರಾ. ಹೆ. 169 ರಲ್ಲಿ ಕುಲಶೆಕರ ಕಡೆಗೆ ಹೊಗಿತ್ತಿದ್ದು, ಔಷಧಿಯನ್ನು ಖರೀದಿಸುವ ಸಲುವಾಗಿ ಕೈಕಂಬ ಬಳಿ ಇರುವ ಟ್ರೈನಿಟಿ ಮೇಡಿಕಲ್ ನ ಎದುರಿನ ರಸ್ತೆಯ ಇನ್ನೊಂದು ಬದಿಯಲ್ಲಿ ಕಾರನ್ನು ನಿಲ್ಲಿಸಿ, ಔಷಧಿ ಖರಿದಿಸಲು ಟ್ರೈನಿಟಿ ಮೇಡಿಕಲ್  ಕಡೆಗೆ ರಸ್ತೆ ದಾಟುತ್ತಿರುವ ಸಮಯ ಸುಮಾರು 20:00 ಗಂಟೆಗೆ ಕೈಕಂಬ ಕಡೆಯಿಂದ ಕುಲಶೆಕರ ಕಡೆಗೆ KA-19-HK-6929 ನೇ ನೊಂದಣಿ ಸಂಖ್ಯೆಯ ಸ್ಕೂಟರನ್ನು ಅದರ ಸವಾರ ಅತಿವೇಗ, ಅಜಾಗರೂಕತೆ, ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರು ಡಾಮಾರು ರಸ್ತೆಗೆ ಬಿದ್ದು  ಎಡಕಾಲಿನ ಅ್ಯಂಕಲ್ ಬಳಿ ರಕ್ತ ಗಾಯ ಹಾಗೂ ಬಲ ಕೈಯ ಮೋಣ ಗಂಟಿಗೆ ತರಚಿದ ಗಾಯವಾಗಿರುತ್ತದೆ. ಮಂಗಳೂರು ನಗರದ ಎಸ್.ಸಿ.ಎಸ್ ಆಸ್ಪತ್ರೆಯ ವೈದ್ಯರು ಪರಿಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿ ಒಳ ರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in : Traffic North Police Station                                                  

ದಿನಾಂಕ 27-12-2022 ರಂದು ಪಿರ್ಯಾದಿ Kiran N K ರವರು, ಅವರ ಸ್ನೇಹಿತನ ಬಾಬ್ತು KA-19-EM-6699 ನೇ ನಂಬ್ರದ ಮೋಟಾರ್ ಸೈಕಲಿನಲ್ಲಿ ಪಾವಂಜೆಗೆ ತೆರಳಿ ವಾಪಾಸ್ಸು ಅಲ್ಲಿಂದ ಮನೆಗೆ ತೆರಳುವ ಸಮಯ ರಾತ್ರಿ ಸುಮಾರು  10:25 ಗಂಟೆಗೆ ಪಾವಂಜೆ ಜಂಕ್ಷನ್ ನಲ್ಲಿ ಯೂ ಟರ್ನ್ ಮಾಡಿಕೊಂಡು ಮುಕ್ಕ ಕಡೆಗೆ ಹೋಗಲು  ಸ್ವಲ್ಪ ಮುಂದೆ ಚಲಿಸುತ್ತಿದ್ದಂತೆ ಹಿಂದಿನಿಂದ ಅಂದರೆ ರಾ. ಹೆ. 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರ್ ನಂಬ್ರ MH-14-JE-1339 ನೇದನ್ನು ಅದರ ಚಾಲಕನಾದ ಅಶ್ವಿನ್ ರಾಯ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ್ದು ಅವರ ಎಡ ಹೊಟ್ಟೆಯ ಮೇಲೆ, ಎಡಕಾಲಿನ ಪಾದದ ಬಳಿ, ಬಲಕೆನ್ನೆಗೆ ತೆರಚಿದ ರೀತಿಯ ಗಾಯ, ಹಾಗೂ ಹಣೆಯ ಮೇಲ್ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

  

Crime Reported in Moodabidre PS                                                           

ದಿನಾಂಕ: 26-12-2022 ರಂದು ಪಿರ್ಯಾದಿ PRAJWAL SHENOY ರವರ  ತಂದೆಯಾದ ರಾಮ್ ದಾಸ್ ಶೆಣೈ (60) ರವರು ಮನೆಯಿಂದ ತಮ್ಮ ಬಾಬ್ತು ಸ್ಕೂಟರ್ ನಂ: ಕೆ.ಎ-19-ಎಕ್ಸ್-7977 ನ್ನು ಸವಾರಿ ಮಾಡಿಕೊಂಡು ಮೂಡಬಿದರೆ ಮಾರ್ಕೆಟ್ ಗೆ ಹೋಗಿದ್ದು ಮೂಡಬಿದರೆಯ ಜಿ.ವಿ ಪೈ ಆಸ್ಪತ್ರೆಯ ಹತ್ತಿರ ಸಮಯ ಸುಮಾರು 11-15 ಗಂಟೆಗೆ ಸ್ಕೂಟರ್ ನ್ನು ನಿಲ್ಲಿಸಿದಾಗ ಕೆ.ಎ-21-ಎನ್-4487 ನೇ ಮಹಿಂದ್ರ ಬೊಲೆರೊ ಕಾರನ್ನು ಅದರ ಚಾಲಕ ಲ್ಯಾನ್ಸಿ ಡಿಸೋಜ ಎಂಬುವರು ಹಿಂದಿನಿಂದ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಲ ಕಾಲಿನ ಮೇಲೆ ಹಾಯಿಸಿದ್ದರಿಂದ ಪಾದದ ಬಳಿ ಮೂಳೆ ಮುರಿತವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-12-2022 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080