ಅಭಿಪ್ರಾಯ / ಸಲಹೆಗಳು

Crime Reported in : Barke PS

ಪಿರ್ಯಾದಿದಾರರಾದ ರಾಜೇಂದ್ರ ಬಿ ಪೊಲೀಸ್ ಉಪನಿರೀಕ್ಷಕರು ಸಿಸಿಬಿ ಘಟಕ ರವರಿಗೆ 28-10-2022 ಮಧ್ಯಾಹ್ನ 13-30 ಗಂಟೆಗೆ ಮಂಗಳೂರು ನಗರದ ಮಣ್ಣಗುಡ್ಡೆ ಬರ್ಕೆ ಬ್ರಿಡ್ಜ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳಾದ 1). ವಾಲ್ಟರ್ ಜಾಕ್ಸ್ ಶೆಟ್ಟಿಯಾನ್ ಮತ್ತು 2). ಸುನೀಲ್ ಶೆಟ್ಟಿಯವರು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಧಂಧೆ ಮಾಡುತ್ತಿದ್ದಾರೆಂದು ಮಾಹಿತಿ ಬಂದಂತೆ ಸ್ಥಳಕ್ಕೆ ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಧಂಧೆಯನ್ನು ನಡೆಸುತ್ತಿದ್ದ ಎರಡು ಜನರನ್ನು ವಶಕ್ಕೆ ತೆಗದುಕೊಂಡು ಆರೋಪಿಗಳು ಮಟ್ಕಾ ಚೀಟಿ ಬರೆದು ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 7,000/-, ಮಟ್ಕಾ ಚೀಟಿ-1, ಪೆನ್ನು -1 ನ್ನು ಸ್ವಾಧೀನಪಡಿಸಿಕೊಂಡು  ಆರೋಪಿಗಳನ್ನು, ಮತ್ತು ಸೊತ್ತುಗಳನ್ನು ದೂರಿನೊಂದಿಗೆ ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Mangalore East Traffic PS                

ದಿನಾಂಕ: 28-10-2022 ರಂದು ಪಿರ್ಯಾದಿ VISHAL DSOUZA ದಾರರು ತಮ್ಮ ಬ್ಯಾಂಕ್ ಸಂಬಂಧ ಕ್ರೆಡಿಟ್  ಕಾರ್ಡ್ ಬಗ್ಗೆ ಸಾರ್ವಜನಿಕರೊಬ್ಬರನ್ನು ಭೇಟಿಯಾಗುವ ಬಗ್ಗೆ ಸದ್ರಿಯವರ ಅಕ್ಕ ವಿನಿಷಾ ಡಿಸೋಜರವರ ಬಾಬ್ತು KA-19-HJ-0335 ನಂಬ್ರದ ಆಕ್ಟಿವಾ ಸ್ಕೂಟರ್ ನಲ್ಲಿ ತನ್ನ ಸಹೋದ್ಯೋಗಿಯಾದ ರಕ್ಷಿತಾ ಎಂಬುವರನ್ನು ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಶಿವಭಾಗ್ ಜಂಕ್ಷನ್ ಬಳಿಯಿರುವ ಅರಳಿ ಮರದ ಕಟ್ಟೆ ಕಡೆಯಿಂದ ಆಗ್ನೇಸ್ ಕಡೆಗೆ ಹೋಗುವರೇ ಶಿವಭಾಗ್ ಜಂಕ್ಷನ್ ನಲ್ಲಿರುವ ಟ್ರಾಫಿಕ್ ಅಂಬ್ರೆಲ್ಲಾವನ್ನು  ಬಳಸಿಕೊಂಡು ಬಲಕ್ಕೆ ತಿರುಗಿ ಹೋಗುತ್ತಿದ್ದಾಗ ಸಮಯ ಸುಮಾರು ಸಂಜೆ 4:30 ರ ವೇಳೆಗೆ ಆಗ್ನೇಸ್ ಕಡೆಯಿಂದ KL-46-F-6367 ನೋಂದಣಿ ನಂಬ್ರದ ಕಾರನ್ನು ಅದರ ಚಾಲಕನಾದ ಶಿಬಿನ್ ರಾಜ್ ಕೆ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ನಂತೂರು ಕಡೆಗೆ ಹೋಗಲು ಶಿವಭಾಗ್ ಜಂಕ್ಷನ್ ನಲ್ಲಿರುವ ರಸ್ತೆ ಮಧ್ಯೆದಲ್ಲಿರುವ ಟ್ರಾಫಿಕ್ ಅಂಬ್ರೆಲ್ಲಾವನ್ನು ಎಡಬದಿಯಿಂದ ಸುತ್ತು ಬಳಸದೇ ನೇರವಾಗಿ ಚಲಾಯಿಸಿಕೊಂಡು ಬಂದು ನಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಬಲ ಬದಿಗೆ  ಢಿಕ್ಕಿ ಪಡಿಸಿದ ಪರಿಣಾಮ ಸವಾರ ಮತ್ತು ಸಹ ಸವಾರರಿಬ್ಬರೂ ವಾಹನ ಸಮೇತ ರಸ್ತೆಗೆ ಬಿದ್ದಾಗ ಪಿರ್ಯಾದಿದಾರರು ಸ್ಕೂಟರ್ ನಿಂದ ಎಸೆಯಲ್ಪಟ್ಟು ಬಲ ಭುಜಕ್ಕೆ ಹಾಗೂ ಎಡ ಕಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಹಿಂಬದಿ ಸವಾರೆ ಎರಡೂ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಅಪಘಾತವನ್ನು ಕಂಡು ಸ್ಥಳಕ್ಕೆ ಬಂದ ಸುಶ್ಮಿತಾ ಶೆಟ್ಟಿರವರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಗಾಯಾಳು ರಕ್ಷಿತಾರವರು ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು, ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

Panambur PS

ಪ್ರಕರಣದ ಪಿರ್ಯಾಧಿದಾರರಾದ ಮೊಹಮ್ಮದ್ ಶರೀಫ್ (62) ತಂದೆ: ಹಸನಬ್ಬ ವಾಸ: ಎಮ್.ಜೆ.ಎಮ್ 344, ಬದ್ರಿಯ ಮಸೀದಿ ಬಳಿ, ಕಸಬಾ ಬೆಂಗ್ರೆ, ಮಂಗಳೂರು ತಾಲೂಕು ಎಂಬುವರು, ಕಸಬಾ ಬೆಂಗ್ರೆಯಲ್ಲಿರುವ  ಮಂಜಿಯಲ್ಲಿನ ಹಡಗು ರಿಪೇರಿ ಯಾರ್ಡ್ ನಲ್ಲಿ ಸುಮಾರು 25 ವರ್ಷದಿಂದ ವಾಚ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 28-10-2022 ರಂದು ಸಂಜೆ ಗಂಟೆ 04-30  ಸುಮಾರಿಗೆ ಪಿರ್ಯಾಧಿದಾರರು ವಾಚ್ ಮೆನ್ ಕೆಲಸ ಮಾಡಿಕೊಂಡಿದ್ದ  ಮಂಜಿಯಲ್ಲಿ  ರಿಪೇರಿಗೆ ನಿಲ್ಲಿಸಿದ  ಲಕ್ಷದೀಪದ ಹಂಸತಂಗಲ್ ಎಂಬುವರ ಮಾಲೀಕತ್ವದ ನಿಜತ್ , ಸೀದಿ ಎಂಬುವರ ಮಾಲಿಕತ್ವದ ಅಲ್ –ಜಜಿರಾ , ಮತ್ತು ಶಾಫಿ ಮಾಲೀಕತ್ವದ ಆಲಿಮದತ್ ಎಂಬ ಹೆಸರಿನ 03 ಹಡಗುಗಳಿಗೆ  ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದನ್ನು ನೋಡಿ, ಪಿರ್ಯಾಧಿದಾರರು ಬಸೀರ್ ಅಹಮ್ಮದ್ ರವರನ್ನು ಕರೆದು,  ಆಸುಪಾಸಿನ ಜನರೆಲ್ಲ ಬಂದು ಸೇರಿ ನೋಡುತ್ತಿದ್ದಂತೆ, ಹಡಗುಗಳಿಗೆ ಹತ್ತಿಕೊಂಡಿದ್ದ,  ಬೆಂಕಿ ಹಡುಗಳಿಗೆ ಸಂಪೂರ್ಣವಾಗಿ  ಆವರಸಿಕೊಂಡು  ಹೊತ್ತಿ ಉರಿಯುತ್ತಿದ್ದನ್ನು ನೋಡಿ , ಪಿರ್ಯಾಧಿದಾರರು  ಸ್ಥಳಿಯರ ಸಹಾಯದಿಂದ ಅಗ್ನಿಶಾಮಕ್ಕೆ  ಪೋನ್ ಮಾಡಿ ಕರೆಸಿಕೊಡು ಬೆಂಕಿ ನಂದಿಸಲು ಪ್ರಯತ್ನಿಸಿದರೂ  ಬೆಂಕಿಯ ಪ್ರಭಾವ ಹೆಚ್ಚು ಇದ್ದದರಿಂದ ಹಡಗಗಳು ಸಂಪೂರ್ಣವಾಗಿ, ಹೊತ್ತಿ ಉರಿದಿರುತ್ತವೆ. ಆ ಸಮಯ ಅಲ್ಲೆ ಸಮೀಪದಲ್ಲಿದ್ದ ರಪೀಕ್ ರವರ ಮನೆಗೆ ಬೆಂಕಿ ಅವರಿಸಿಕೊಂಡು ಸ್ವಲ ಭಾಗ ಹೊತ್ತಿ ಉರಿದಿರುತ್ತದೆ. ಆ ಸಮಯ ಪೊಲೀಸ್ ಬಂದು ರಕ್ಷಣೆ ಮಾಡಿರುವುದಾಗಿದೆ. ಹಡಗಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ  03 ಹಡಗುಗಳು ಸಂಪೂರ್ಣವಾಗಿ ಉರಿದು ಕರಲಾಗಿರುವುದಾಗಿದೆ.  ಇದರಿಂದಾಗಿ ಸುಮಾರು 2.50 ಕೋಟಿ ರೂಪಾಯಿ ನಷ್ಟವಾಗಿರುತ್ತದೆ. ಯಾರೋ ಕಿಡಿಗೇಡಿಗಳು ಹಡಗುಗಳಿಗೆ ಬೆಂಕಿ ಹಚ್ಚಿರುವ ಕಾರಣದಿಂದ   ಈ ಘಟನೆ ಸಂಭವಿಸಿದೆ. ಆರೋಪಿಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿಕೆಂದು ಕೋರಿಕೆ ಎಂಬಿತ್ಯಾಧಿಯಾಗಿರುತ್ತದೆ.

Mulki PS

ದಿನಾಂಕ 28-10-2022 ರಂದು  ರಾತ್ರಿ ಸುಮಾರು 7-30 ಗಂಟೆಯ ಸಮಯಕ್ಕೆ ಮಂಗಳೂರು ಸಿಸಿಬಿ ಘಟಕದ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶಶಿಧರ ಶೆಟ್ಟಿ ಮತ್ತು  ಸಿಬ್ಬಂದಿಗಳಿಗೆ ದೊರೆತ ಮಾಹಿತಿಯಂತೆ ಮಂಗಳೂರು ತಾಲೂಕು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ  ಹಳೆಯಂಗಡಿ ಕೋಸ್ಟಲ್ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್  ಪರಿಸರದಲ್ಲಿ  ಒಬ್ಬಾತನು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ರಾತ್ರಿ 9-15 ಗಂಟೆಗೆ ಹಳೆಯಂಗಡಿ ಕೋಸ್ಟಲ್ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್  ಬಳಿ ತಲುಪಿದಾಗ ಒಬ್ಬಾತನು ಚೀಟಿಯನ್ನು ಹಿಡಿದು ಪೆನ್ನಿನಿಂದ ಬರೆಯುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದನ್ನು ಕಂಡು ಪಿರ್ಯಾದಿದಾರರು ಹಾಗೂ  ಸಿಬ್ಬಂದಿಗಳು ಕೂಡಲೆ ದಾಳಿ ಮಾಡಿದಾಗ ಅಲ್ಲಿ ಸೇರಿದ್ದವರು ಓಡಿ ಪರಾರಿಯಾಗಿದ್ದು ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ಆತನ ಹೆಸರು  ನಾರಾಯಣ @ ಅಣ್ಣು (53) ವಾಸ: ಸುಬ್ರಮಣ್ಯ ನಗರ ಮನೆ, ಲೈಟ್ ಹೌಸ್ ತೋಕೊರು,ಹಳೆಯಂಗಡಿ ಅಂಚೆ ಮುಲ್ಕಿ, ಮಂಗಳೂರು ದ.ಕ ಎಂಬುದಾಗಿ ತಿಳಿಸಿದ್ದು, ಆತನು ಮಟ್ಕಾ ಜೂಜಾಟಕ್ಕಾಗಿ ಸಾರ್ಜಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದ್ದು,  ಅತನನ್ನು ಹಾಗೂ ಆತನು ಮಟ್ಕಾ ದಂಧಕ್ಕೆ  ಬಳಸುತ್ತಿದ್ದ 1) ಮಟ್ಕಾ ಆಟಕ್ಕೆ ನಂಬ್ರವನ್ನು ಹಾಗೂ ಹಣವನ್ನು ಬರೆದ ಹಾಳೆ-1, 2) ಬರೆಯಲು ಉಪಯೋಗಿಸಿದ ಬಾಲ್ ಪೆನ್-1, 3) ನಗದು ಹಣ ರೂ-2170/- ನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಆರೋಪಿ ಮತ್ತು ಸ್ವಾಧೀನಪಡಿಸಿದ ಸೊತ್ತನ್ನು ವರದಿಯೊಂದಿಗೆ ಮುಲ್ಕಿ ಠಾಣೆಗೆ ಹಾಜರು ಪಡಿಸಿರುವುದಾಗಿದೆ ಎಂಬಿತ್ಯಾದಿ.

Traffic North Police Station           

ಪಿರ್ಯಾದಿ Suresh ದಾರರು ಶಕ್ತಿ ರೆಸಿಡೆನ್ಸಿಯಲ್ ಶಾಲೆಗೆ ಸಂಬಂಧಿಸಿದ ಶಾಲಾ ವಾಹನದ ಚಾಲಕರಾಗಿದ್ದು ದಿನಾಂಕ: 28-10-2022 ರಂದು ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಗೆ KA-19-AC-6252 ನೇ ಶಾಲಾ ವಾಹನದಲ್ಲಿ ಶಾಲಾ ಮಕ್ಕಳನ್ನು ಕಾವೂರು ಕಡೆಯಿಂದ ಬೊಂದೆಲ್ ಮಾರ್ಗವಾಗಿ ಶಕ್ತಿನಗರ ಕಡೆಗೆ ಹೋಗುವಾಗ KIOCL ಕ್ವಾಟರ್ಸ್ ನ ಗೇಟಿನ ಎದುರು ತೆರೆದ ಡಿವೈಡರ್ ನ ಸಮೀಪ KA-19-AC-7813 ನೇ ಆಟೋರಿಕ್ಷಾವನ್ನು ಅದರ ಚಾಲಕನಾದ ಹರ್ಷಿತ್ ಕುಮಾರ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಾಲಾ ವಾಹನದ ಬಲಬದಿಯ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಾಲಾ ವಾಹನದಲ್ಲಿದ್ದ ನಾಲ್ಕು ಮಕ್ಕಳ ಪೈಕಿ ಭರತ್ ಎಂಬ ಹುಡುಗನಿಗೆ ಸೊಂಟದ ಎಡಬದಿಗೆ ಹಾಗೂ ಎಡಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ಒಳಗಾಯವಾಗಿ ಚಿಕಿತ್ಸೆ ಬಗ್ಗೆ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬಿತ್ಯಾಧಿ.

 

ಇತ್ತೀಚಿನ ನವೀಕರಣ​ : 29-10-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080