ಅಭಿಪ್ರಾಯ / ಸಲಹೆಗಳು

Crime Reported in : Kavoor PS    

ಪಿರ್ಯಾದಿ HARISH SHIVU GOUDA  ದಿನಾಂಕ 24-12-2022 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಯವರೊಂದಿಗೆ ಕಾರವಾರಕ್ಕೆ ಹೋಗಿದ್ದು ದಿನಾಂಕ 29-12-2022 ರಂದು ಕಾರವಾರದಿಂದ ಸಂಜೆ ಸುಮಾರು 4-00 ಗಂಟೆಗೆ ಕಾವೂರುನಲ್ಲಿರುವ  ಮನೆಗೆ ವಾಪಾಸ್ಸು ಬಂದು ಮನೆಯ ಮುಂಬಾಗಿಲನ್ನು ತೆರೆದು ಮನೆಯ ಒಂದನೇ ಮಹಡಿಗೆ ಬಂದಾಗ  ಒಂದನೇ ಮಹಡಿಯ ಹಿಂದಿನ ಬಾಗಿಲು ತೆರೆದಿದ್ದು  ನೋಡಲಾಗಿ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮುರಿದು ಯಾರೋ ಕಳ್ಳರು ತೆರೆದು ಒಳ ಪ್ರವೇಶಿಸಿ ಮನೆಯ ಒಂದನೇ ಮಹಡಿಯ ಬೆಡ್ ರೂಮನ ವಾರ್ಡ್ ರೂಬುನಲ್ಲಿ ಇರಿಸಿದ  ಟೈಟಾನ್ ವಾಚ್ ಗಳು ಒಟ್ಟು 5 , 10 ಗ್ರಾಂ ತೂಕದ ಸೀಲ್ವರ್ ಕಾಯಿನ್ , ಹಳೆಯ ವಿದೇಶಿ ಕಾಯಿನ್ಸ್ , 20 ಗ್ರಾಂ ತೂಕದ ಚಿನ್ನ ಬಳೆ ಇದರಲ್ಲಿ ಹಸಿರು ಬಣ್ಣದ ಕಲ್ಲುಗಳು ಇರುತ್ತದೆ, ಕಳವು ಮಾಡಿದಾಗಿರುತ್ತದೆ. ಕಳವು ಮಾಡಿದ ಮಾಡಿದ ಒಟ್ಟು ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 98000/- ಆಗಬಹುದು, ಅದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ.

 

Crime Reported in : Traffic North Police Station                                                   

ಪಿರ್ಯಾದಿ MANISH S SHETTY ದೊಡ್ಡಪ್ಪ ರವರಾದ ತಾರನಾಥ ನಂದ್ಯಪ್ಪ ಶೆಟ್ಟಿ  ಎಂಬವರು   ದಿನಾಂಕ 28-12-2022 ರಂದು ಸಂಜೆ 18.45 ಗಂಟೆಗೆ ಸುರತ್ಕಲ್ ನ ಪಡ್ರೆ ಕ್ರಾಸ್ ಬಳಿ ತನ್ನ ಮನೆಗೆ ಹೋಗುವರೇ ಉಡುಪಿ-ಮಂಗಳೂರು NH 66 ನೇ ರಸ್ತೆಯನ್ನು ದಾಟುತ್ತಿದ್ದ ಸಮಯ ಉಡುಪಿ ಕಡೆಯಿಂದ ಬಂದಂತಹ KA-19-HE-3882 ನೇ ಬುಲ್ಲೆಟ್ ಮೋಟಾರು ಸೈಕಲನ್ನು ಅದರ ಸವಾರ ಅಭಿಲಾಶ್ ಸಾಲ್ಯಾನ್ ರವರು ಅತಿ ವೇಗ ಮತ್ತು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ತಾರನಾಥ ನಂದ್ಯಪ್ಪ ಶೆಟ್ಟಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಸ್ವರೂಪದ ಗುದ್ದಿದ ರಕ್ತ ಗಾಯ, ಎದೆಗೆ ಮೂಳೆ ಮುರಿತದ ಗಂಭೀರ ಗಾಯ, ಎರಡು ಕಾಲುಗಳಿಗೆ ಮೂಳೆ ಮುರಿತದ ಗಂಭೀರ ಗಾಯ, ಸೊಂಟದ ಎಡ ಬದಿ ಮೂಳೆ ಮುರಿತದ ಗಂಭೀರ ಗಾಯ, ಎಡಕೈ ಮತ್ತು ಬಲಕೈ ಗೆ ಗುದ್ದಿದಂತಹ ರಕ್ತ ಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಪ್ರಜ್ಙಾಹೀನ ಸ್ಥಿತಿಯಲ್ಲಿದ್ದವರನ್ನು ಘಟನಾ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ AJ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Crime Reported in : Traffic North Police Station                                                   

 ಪಿರ್ಯಾದಿದಾರರ PUNITH KUMAR ತಂದೆಯವರಾದ ಮೋಹನ್ ಸನಿಲ್ ಎಂಬುವರು ದಿನಾಂಕ 29-12-2022 ರಂದು ಬೈಕಂಪಾಡಿಯಲ್ಲಿ ಕೆಲಸ ಮುಗಿಸಿಕೊಂಡು ಸುರತ್ಕಲ್ ಬಳಿ ಬಸ್ಸಿನಿಂದ ಇಳಿದು, ಸಂಜೆ ಸಮಯ ಸುಮಾರು 19:00 ಗಂಟೆಗೆ ಸುರತ್ಕಲ್ ನ ಶಿಶಿರ್ ಮೆಡಿಕಲ್ ಬಳಿ ರಾ.ಹೆ. 66 ನ್ನು ದಾಟುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರ್ ನಂಬ್ರ KA-19-ML-0652 ನೇದನ್ನು ಅದರ ಚಾಲಕ ಗಣೇಶ್ ಕರ್ಕೆರ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಯ ಎಡಭಾಗಕ್ಕೆ ರಕ್ತಗಾಯ,ಬಲ ಕಣ್ಣಿಗೆ ಗುದ್ದಿದ ರೀತಿಯ ಗಾಯ,ಬಲಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ಎಡಕೈ ಉಂಗುರ ಬೆರಳಿಗೆ ಮುರಿತದ ಗಾಯವಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಅಪಘಾತಪಡಿಸಿದ ಕಾರಿನ ಚಾಲಕರು ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಆಂಬುಲೆನ್ಸ್ ನಲ್ಲಿ ಮಂಗಳೂರಿನ AJ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Crime Reported in : Moodabidre PS

 ದಿನಾಂಕ: 27-12-2022 ರಂದು ಪಿರ್ಯಾದಿದಾರರಾದ ದೇವರಾಜ್ ರವರು ಬನ್ನಡ್ಕದಿಂದ ಹೊರಟು ಮೂಡಬಿದ್ರೆ ಕಡೆಗೆ ತನ್ನ ಬಾಬ್ತು ಕೆ.ಎ-13-ಇಬಿ-8339 ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ರಾತ್ರಿ 09.15 ಗಂಟೆಗೆ ಮೂಡಬಿದರೆ ನಿಶ್ಮಿತ ಸರ್ಕಲ್ ಬಳಿ ತನ್ನ ಮೊಟಾರ್ ಸೈಕಲ್ ನ್ನು ಬಲಕ್ಕೆ ತಿರುಗಿಸಿ ಪಂಚರತ್ನ ಹೊಟೇಲ್ ಬಳಿ ತಲುಪುತ್ತಿದ್ದಂತೆ ವಿದ್ಯಾಗಿರಿ ಕಡೆಯಿಂದ ಮೂಡಬಿದ್ರೆ ಕಡೆಗೆ ಕೆ.ಎ-19-ಇಇ-7935 ಮೋಟಾರ್ ಸೈಕಲ್ ನ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಎಡಗಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಅಲ್ಲಿ ಸೇರಿದ್ದವರು ಚಿಕಿತ್ಸೆಯ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 31-12-2022 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080